Tuesday, March 22, 2011

ಮಠಗಳು; ಪ್ರಯೋಜನ ಮತ್ತು ಅನುದಾನ

ಮಠಗಳು; ಪ್ರಯೋಜನ ಮತ್ತು ಅನುದಾನ
ಮಠಗಳಿಗೆ ಸರಕಾರೀ ಅನುದಾನ ಅವಶ್ಯವಾಗಿ ಬೇಕು; ಇದರಲ್ಲಿ ರಾಜಕೀಯ ಸುತರಾಂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಲು ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಲೇಖನ ಬರೆದಿದ್ದಾರೆ.
ಅವರೆಂದಿರುವಂತೆ, ದೊಡ್ಡ ಮಠಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯ ತಾಂತ್ರಿಕ Course ಗಳಲ್ಲೂ Demandful ಶಿಕ್ಷಣ ನೀಡುತ್ತಿದ್ದು, ಆ ದಕ್ಷತೆಯಿಂದ ವಿಶ್ವವಿದ್ಯಾಲಯ ಎಂಬ ಔನ್ನತ್ಯವನ್ನೂ ಪಡೆದಿರುವುದಿದೆ. ಆದರೆ ಮಠಗಳೆಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಈ ಮೂಲಭೂತ ಉದ್ದೇಶಕ್ಕಾಗಿಯೇ? ಅಲ್ಲವೇ ಅಲ್ಲ!
ವಿರಕ್ತ-ವೈರಾಗಿಗಳ ಸಾಧನೆ, ತಪಶ್ಚರ‍್ಯೆ, ಲೋಕಾನುಕಂಪ ಮುಂತಾದ ಪ್ರಾಂಜಲ ಗುಣಗಳಿಗೆ ಮನಸೋತು ಅವರ ಸುತ್ತ ಘೇರಾಯಿಸಿದ ಜನಮಾನಸ ಅವರುಗಳನ್ನು ಎಷ್ಟು ಹಚ್ಚಿಕೊಂಡಿರುತ್ತಿತ್ತೆಂದರೆ, ಅವರ ದೇಹವಸಾನದ ನಂತರ ಆ ಅಗಲಿಕೆಯನ್ನು ಸಹಿಸಲಾರದೆ ಅವರ ನೆನಪನ್ನೇ ಮಠವಾಗಿ ಬೆಳೆಸಿಕೊಂಡು ಬಂದಿರುವ ವಾಸ್ತವವಿದೆ. ಇನ್ನೊಂದೆಡೆ ಆಚಾರ‍್ಯ ಪರಂಪರೆ, ಜ್ಞಾನದ ಆಳಕ್ಕಿಳಿದಿಳಿದು, ಒಂದೇ ಶಾಸ್ತ್ರದಲ್ಲಿ ತಮ್ಮ ತಮ್ಮ ಸೂಕ್ಷ್ಮ ವಿಶಿಷ್ಟತೆಯ ಸಿದ್ಧಾಂತಗಳನ್ನು ಸ್ಥಾಪಿಸಿ ಪ್ರತ್ಯೇಕ ಮಠಗಳಾಗಿ ಕವಲೊಡೆದು ಬಂದಿದೆ.
ಹೀಗಾಗಿ ಸಮಾಜ ಸೇವೆಯ ವಿಶಿಷ್ಟತೆ ಒಂದೆಡೆ, ಸೈದ್ಧಾಂತಿಕ ವಿಭಿನ್ನತೆ ಇನ್ನೊಂದೆಡೆ. ಇವು ಮಠಗಳ ಅಸ್ತಿತ್ವದ ಜೀವಾಳ. ಆದ್ದರಿಂದ ಮಠಗಳಿಗೆ ಅನುದಾನ ಕೊಡುವುದೇ ಆದರೆ, ಅದು ಅವುಗಳ ಸುಸೂಕ್ಷ್ಮ ಪರಿಣಿತಿ - Specialization - ಮತ್ತು ಪುರಾತತ್ವ ಮೌಲ್ಯ - Archival Value -ಕಾಪಾಡಿಕೊಳ್ಳುವಷ್ಟಿದ್ದರೆ ಬೇಕಾದಷ್ಟಾಗುತ್ತದೆ; ಇದಕ್ಕೆ ಶತಕೋಟಿ, ಸಹಸ್ರ ಕೋಟಿಗಟ್ಟಲೆಗಳ ಅಗತ್ಯ ಖಂಡಿತಾ ಇರುವುದಿಲ್ಲ!
ಈ ಕೋಟಿಗಟ್ಟಲೆಯೇನಿದ್ದರೂ, ಜಾತಿಯನ್ನು ವೋಟಿನ ಸಂಖ್ಯಾ ಶಕ್ತಿಯನ್ನಾಗಿಸುವ ಉದ್ಯಮದ ಮೇಲೆ ಹೂಡುವ ಬಂಡವಾಳವಾಗುವುದು! ಇದನ್ನು ಕೈಗೊಂಡ ಆಧ್ಯಾತ್ಮ ಪುರುಷ ವೇಷಧಾರಿಗಳು, ಪರಿಣಿತ ಸೈದ್ಧಾಂತಿಕ ಭಿನ್ನತೆಯ Academics ಅನ್ನು ವೋಟಿನ Margin ಆಗಿ ಪರಿವರ್ತಿಸುವ ಪವಾಡ ಪುರುಷರಾಗಿ ಮೆರೆದುಬಿಡುತ್ತಾರೆ!
ಅತ್ಯಲ್ಪ ಸಂಖ್ಯಾತರಾದ ಸಭ್ಯ, ಸಾತ್ವಿಕ, ಸತ್ಪುರುಷರ ಅಳಲೇನೆಂದರೆ, ಈ ಮೆಲಾಟದಲ್ಲಿ ಅನೂಚಾನ ಪರಂಪರೆ, ಸಮಪ್ರದಾಯ, ಆಚಾರ, ಸುಸೂಕ್ಷ್ಮ ಚಿಂತನಶೀಲತೆಯ ಪರಿಣಿತಿಗಲೆಲ್ಲಾ ಏಕಾಏಕೀ ಭ್ರಷ್ಟ - Corrupt - ಅಗಿ ಜೀವನ ಸ್ವಾರಸ್ಯವೇ ನಷ್ಟವಾಗಿ ಹೋಗುತ್ತಿದೆಯಲ್ಲಾ ಎನ್ನುವುದು!

No comments:

Post a Comment