ಕರ್ನಾಟಕದ ಶಾಸಕರು ವ್ಯಾಪಕವಾಗಿ ಪೊಲೀಸ್ ರಕ್ಷಣೆಗಾಗಿ ಕೋರುತ್ತಿದ್ದಾರೆ. ಅದನ್ನು ಪೂರೈಸಲಾಗುತ್ತಿದೆ ಕೂಡ. ಅಂದಾಜಿನಂತೆ ಶೇ. 90ರಷ್ಟು ಶಾಸಕರು ಈಗ ಪೊಲೀಸ್ ಸಂರಕ್ಷಣೆಯಲ್ಲಿದ್ದಾರಂತೆ. ಜನಪ್ರತಿನಿಧಿಗಳು ಭೀತಿಯಿಂದ ಪೊಲೀಸ್ ರಕ್ಷಣೆಯಲ್ಲಿರುವುದು ಪ್ರತಿಷ್ಠೆಯ ಸಂಗತಿಯೋ? ಅವಮಾನದ ಸಂಗತಿಯೋ? ಶುದ್ಧ, ಚಾರಿತ್ರ್ಯ, ಶುದ್ಧ ಹಸ್ತ, ’ಶ್ರದ್ಧೆ-ಶುದ್ಧಾಂತಃಕರಣಗಳ ಅತ್ಮಸಕ್ಷಿಯುಳ್ಳವರು ಯಾವುದೇ ಹೊರಗಣ ಶಕ್ತಿಗೆ ಅಷ್ಟಾಗಿ ಅಂಜುವುದಿಲ್ಲ. ಪಕ್ಕದ ಮನೆ ಕಿಟಕಿ ಗಾಜಿಗೆ ಕಲ್ಲೆಸೆದು ಗಾಬರಿಗೊಂಡ ಮಗು ಓಡಿಬಂದು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವುದು ಸಾಮಾನ್ಯ. ಏಟಿನ ಭಯವಷ್ಟೇ ಅಲ್ಲ, Sense of shame ಸಹ ಆ ಸುಸಂಸ್ಕೃತ ಮಗುವನ್ನು ಕಾಡಿತು! ಈಗ ಈ ಜನಪ್ರತಿನಿಧಿಗಳನ್ನು ಕಾಡುತ್ತಿರುವುದೇನು? ಇದನ್ನು ಪೊಲೀಸ್ ರಕ್ಷಣೆ ಎನ್ನಬೇಕೋ, ಪೊಲೀಸ್ ಪಹರೆ ಎನ್ನಬೇಕೋ?
ಈ ಪಹರೆಯೂ ಅವರ ಸಾಮಾಜಿಕಾರ್ಥಿಕ ಅಪರಾಧದ ಮೇಲೆ ಕಣ್ಣಿರಿಸುವುದಕ್ಕಿಂತಾ ರಾಜಕೀಯ ಬೇಹುಗಾರಿಕೆ ಉದ್ದೇಶ ಹೊಂದಿದ್ದರೂ ಆಶ್ಚರ್ಯವಿಲ್ಲ! ಬಾಹುಬಲ, ಮದ್ಯಬಲ, ಹಣಬಲಗಳಿಂದಲೇ ಮಾರ್ಜಿನಲ್ ವೋಟಿನಿಂದ ಗೆದ್ದು ಬಂದವರಿಗೆ, ಅದೇ ತಂತ್ರದ ಎದುರಾಳಿಯಿಂದ ನಿರಂತರ ಪುಕ-ಪುಕವಿರುವುದು ಸಹಜವೆ. ಅದು ಜೀವ ಹೋಗುವ ಭಯಕ್ಕಿಂತಾ ಹೆಚ್ಚಾಗಿ, ಕುರ್ಚಿ ಕಳುವಾಗಿ ಹೋಗುವ ಭಯ! ಮುತ್ಸದ್ದಿತನದ ತಂತ್ರಗಾರಿಕೆಯಲ್ಲಿ ಈಗ Hidden ಭಯೋತ್ಪಾದಕತೆಯಾದ ಮಾಟ-ಮಂತ್ರವೂ ಪ್ರವೇಶಿಸಿಬಿಟ್ಟಿರುವುದರಿಂದ, ಆಳುವ ಮತ್ತು ವಿರೋಧಿಸುವ ಸೌದಾಗಾರರ ವೈಯಕ್ತಿಕ ಗನ್ಮ್ಯಾನ್ಗಳಷ್ಟೇ ಸಾಕಾಗಾವುದಿಲ್ಲ; ಜತೆಗೆ ಭೂತೋಚ್ಛಾಟಕ, ಭೂತೋತ್ಪಾದಕ ಆಚಾರು, ವಾಮಾಚಾರುಗಳನ್ನೂ ನೇಮಿಸಬೇಕಾಗಬಹುದದೇನೋ?!
No comments:
Post a Comment