Sunday, February 6, 2011

ಪ್ರಶಸ್ತಿ ರಾಜಕೀಯ?

ಡಾ. ಚಿಮೂ - ಅಧ್ಯಯನ, ಅಧ್ಯಾಪನ ಮತ್ತು ವಿದ್ವದ್ವಲಯದಲ್ಲಿನ ಸ್ಥಾನ-ಮಾನದಲ್ಲಿ, ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನು ಎಷ್ಟೋ ಮೀರಿದವರು. ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಗೈಡಾಗಿ Real value ಡಾಕ್ಟೊರೇಟ್ ಪದವಿಗಳನ್ನೇ ಕೊಡಮಾಡಿಸಿರುವವರು. ಬೆಂಗಳೂರು ವಿಶ್ವವಿದ್ಯಾಲಯದ ಒಂದು ಗೌರವ ಡಾಕ್ಟೊರೇಟ್ ತಪ್ಪಿದ್ದರಿಂದ ಅವರ ತೂಕವೇನೂ ಇಳಿಯುವುದಿಲ್ಲ; ಸಿಕ್ಕಬೇಕಾದ ಬಡ್ತಿಯೊಂದು ತಪ್ಪಿಹೋಗುವುದಿಲ್ಲ!
ಮತ್ತೂ ಅಂತಹ ಸಾಧ್ಯತೆಯಿರುವುದು, ಪ್ರಶಸ್ತಿ ನಿರಾಕರಿಸಿದರೆನ್ನಲಾದ “ರಾಜಕೀಯ ಪ್ರಾಧಿಕಾರ”ಕ್ಕೇ! ತಮ್ಮದೇ ಕೈಕೆಳಗಿನ ಪರಪಕ್ಷದ ಸರಕಾರವೊಂದನ್ನು ಉರುಳಿಸುವ, ಉಳಿಸುವ ಆ “ಮರ್ಜಿ ಅಧಿಕಾರ”, ವಿದ್ವಾಂಸರೊಬ್ಬರ ಮೇಲೆ ಪ್ರಯೋಗವಾಗಿದೆಯೆಂದಾದರೆ, ಅದು ಸದಭಿರುಚಿಯೂ ಅಲ್ಲ; ಮೇಲಧಿಕಾರ ಗಿಟ್ಟಿಸುವ ರಾಜಕೀಯ ಮುತ್ಸದ್ದಿತನವೂ ಎನಿಸುವುದಿಲ್ಲ!
ಹಂಸರಾಜ ಭಾರದ್ವಾಜರು ನಿಜವಾಗಿ, ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆಯೇ?! ಡಾ. ಚಿದಾನಂದಮೂರ್ತಿಯವರ ವಿದ್ವತ್ ಮಹತ್ವದ ಬಗ್ಗೆ ಅವಿರಿಗೇನೂ ಗೊತ್ತಿಲ್ಲದೆ ಇರಬಹುದು; ಆದರೆ ಅವರಿಗೆ ಪ್ರಶಸ್ತಿ ಪ್ರಸ್ತಾಪವನ್ನು ನಿರಾಕರಿಸುವಷ್ಟು ನಕಾಕಾರಾತ್ಮಕ ಮಾಹಿತಿ, ತಿಳುವಳಿಕೆಗಳು, ತಮಗೆ ನಿಜವಾಗಿ ಇದೆಯೇ ಎನ್ನುವುದನ್ನು ಕುಲಾಧಿಪತಿಗಳು ಆತ್ಮಸಾಕ್ಷಿಪೂರ್ವಕವಾಗಿ ತಿಳಿಸಿಕೊಡಬೇಕಾಗುತ್ತದೆ!

No comments:

Post a Comment