Tuesday, February 1, 2011

ಮುಖ್ಯಮಂತ್ರಿಗೆ ಮಾಟ-ಮಂತ್ರ

        ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ‘ಕೊಲ್ಲಲು’, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಟ-ಮಂತ್ರ ಮಾಡಿಸಿದ್ದಾರಂಬ ಆರೋಪ, ಡಂಗೂರವಾಗಿ ಕೇಳಿಬಂದಿದೆ. ಸಿದ್ದರಾಮಯ್ಯನವರು ಈ ಹಿಂದೆ ದೇವೇಗೌಡರ ಪಟ್ಟಶಿಷ್ಯರಾಗಿದ್ದವರು; ಗೌಡರು ಇಂಥ ಕಲೆಯಲ್ಲಿ ನುರಿತ ಪಟು ಎನ್ನುವ ಶಂಕೆ, ಅರೋಪದ ಹಿಂದಿನ ತರ್ಕಶಾಸ್ತ್ರ!
ಯಡಿಯೂರಪ್ಪನವರೂ, ಸಿದ್ದರಾಮಯ್ಯನವರೂ ಸಂವಿಧಾನದ ಪ್ರಕಾರವಾಗಿಯೇ ಅವರವರ ಉನ್ನತ ಸ್ಥಾನಗಳನ್ನು ಗಿಟ್ಟಿಸಿದವರು. ತಥಾಕಥಿತ ಮಾಟವನ್ನು ಸಿದ್ದರಾಮಯ್ಯನವರು ಸಾಂವಿಧಾನಿಕ ಜವಾಬ್ದಾರಿಯಿಂದಲೇ ಮಾಡಿದ್ದಾರೆಯೇ? ಹಾಗಾದರೆ, ಯಡಿಯೂರಪ್ಪನವರು ಹೈಕೋರ್ಟ್-ಸುಪ್ರೀಂರ್ಟ್‌ಗಳಿಂದ ಅದಕ್ಕೆ ತಡೆಯಾಜ್ಞೆ ತರುವ ಪ್ರಯತ್ನವನ್ನೂ ಮಾಡಿಯಾರೇ?!
        ಸಿದ್ದರಾಮಯ್ಯ ಎಂಬ ಒಬ್ಬರಿಗೆ ಯಡಿಯೂರಪ್ಪ ಎನ್ನುವವರ ಜತೆ ಬಡ್ಡೀ ವ್ಯವಹಾರದ ಅಥವಾ ಆಸ್ತಿ ಹಂಚಿಕೆ ವ್ಯವಹಾರದ ಸರಸ-ವಿರಸಗಳ ಸಂಬಂಧವಿರುತ್ತಿದ್ದರೆ, ಆ ವ್ಯಕ್ತಿಗತ ಹಂತದಲ್ಲಿ ಪರಸ್ಪರರು ಮಾಟಮಾಡಿಸಿದರೆ, ಮಂತ್ರ ಹಾಕಿಸಿಕೊಂಡರೆ, ಅದು ಅವರವರ ವಿದ್ಯಾ ಸಂಸ್ಕಾರದ ಮಟ್ಟಕ್ಕೆ ತಕ್ಕಂತಿರುತಿತ್ತು; ನಾವು, ಸಾರ‍್ವಜಕನಿಕರು ತಲೆ ಕೆಡಿಸಿಕೊಳ್ಳಬೇಕಾದ್ದೇನು ಇರುತ್ತಿರಲಿಲ್ಲ. ಆದರೆ ಅವರುಗಳು ಕ್ರಮವಾಗಿ, ನಾಡಿನ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕರಾಗಿರುವುದರಿಂದ ನಮ್ಮ ಸಂಬಂಧ. ಈ ಜವಾಬ್ದರಿಯಲ್ಲಿವರು ಕೋಟಿ-ಕೋಟಿ ಪ್ರಜೆಗಳ, ಅಂದರೆ ವೋಟು ಹಾಕುವ ನಮ್ಮ, ಪ್ರತ್ಯೇಕ ಹಿತಾಸಕ್ತಿಗಳನ್ನು ಪ್ರತಿಪಾದಿಸುವವರು; ಪ್ರತಿನಿಧಿಸುವವರು. ಅದಕ್ಕಾಗಿಯೇ ಇವರು, ಒಂದು ಕಾಲಾವಧಿಯವರೆಗೆ, ವಿಧಾನಸೌಧ, ವಿಕಾಸಸೌಧ, ಮಿನಿಸೌಧಗಳನ್ನು ತುಂಬಿಕೊಳ್ಳುವುದು! ಆದರೆ ಅವೆಲ್ಲಾ ಶಾಶ್ವತ ಪಿತ್ರಾರ್ಜಿತ, ಸ್ವಯಾರ್ಜಿತ ಸ್ವತ್ತೊ ಎಂದು ಮುತ್ಸದ್ದಿ ಮಹೋದಯರು ಸಂಭ್ರಮಿಸುತ್ತಾರೆ; ಅದೇ ಸರಿ ಎಂದು ನಾವೂ ಕ್ಷಣಕಾಲ ಭ್ರಮಿಸುತ್ತೇವೆ! ಇದು ದುರ್ದೈವ!.



No comments:

Post a Comment